
27th September 2024
ಮಲ್ಲಮ್ಮ ನುಡಿ ವಾರ್ತೆ
ಬೆಂಗಳೂರು, ಸೆಪ್ಟೆಂಬರ್ 26-ಯುವ ಕಲಾವಿದರನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಯುವ ಕಲಾವಿದರ "ನಮ್ಮ ಕಲಾವಿದರು" ಪರಿಚಯಾತ್ಮಕ ಪುಸ್ತಕಗಳನ್ನು ಹೊರತರಲಾಗುತ್ತಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭಾ ಧನಂಜಯ ಅವರು ತಿಳಿಸಿದರು.
ಇಂದು ಕನ್ನಡ ಭವನದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಈಗಾಗಲೇ ತನ್ನ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭರತನಾಟ್ಯ, ಕಥಾಕೀರ್ತನ ಮತ್ತು ಗಮಕ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಿರಿಯ ವಯೋಮಿತಿ 35 ವರ್ಷದ ನಂತರ ಹಾಗೂ ಯುವ ಕಲಾವಿದರ ವಯೋಮಿತಿ 18 ರಿಂದ 35 ವರ್ಷದ ಒಳಗಿರುವಂತೆ "ನಮ್ಮ ಕಲಾವಿದರು" ಶೀರ್ಷಿಕೆಯಡಿ ಪರಿಚಯಾತ್ಮಕ ಪುಸ್ತಕಗಳನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಕಲಾವಿದರ ಪುಸ್ತಕದಲ್ಲಿ ಎಲ್ಲಾ ಕಲಾಪ್ರಕಾರಗಳ ಸಮಗ್ರ ಮಾಹಿತಿಯನ್ನು ಡಿಜಿಟಲೀಕರಣ ಮಾಡಲು ಅಕಾಡೆಮಿಯು ಉದ್ದೇಶಿಸಿದೆ. ಕಲಾ ವಿಭಾಗಗಳ ಕಲಾವಿದರೆಲ್ಲರೂ ಈಗಾಗಲೇ ವಿವರಗಳನ್ನು ಸಲ್ಲಿಸಿದ್ದರೂ ಸಹ ಮತ್ತೊಮ್ಮೆ ತಮ್ಮ ಸ್ವವಿವರಗಳನ್ನು ಅಕಾಡೆಮಿಯ sangeetanrityaacademykarnataka.gov.in ನಲ್ಲಿ ಸಲ್ಲಿಸುವಂತೆ ಕಲಾವಿದರಿಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಸಂಗೀತ ವಿಭಾಗದಲ್ಲಿ ಪಿ.ಶ್ರೀನಿವಾಸಮೂರ್ತಿ 9945194569, ಹಿಂದೂಸ್ತಾನಿ ಸಂಗೀತ ವಿಭಾಗಕ್ಕೆ - ನಿರಂಜನಮೂರ್ತಿ - 8277766109, ನೃತ್ಯ ವಿಭಾಗಕ್ಕೆ - ಸುಗ್ಗನಹಳ್ಳಿ ಷಡಕ್ಷರಿ - 9844349464, ಸುಗಮ ಸಂಗೀತ ವಿಭಾಗಕ್ಕೆ - ಆನಂದ ಮಾದಲಗೆರೆ - 9742116467 ಮತ್ತು ಕಥಾಕೀರ್ತನ ಮತ್ತು ಗಮಕ ವಿಭಾಗಕ್ಕೆ- ಎಂ.ಆರ್.ಸತ್ಯನಾರಾಯಣ - 9243412585 ಸಂಪಾದಕರುಗಳನ್ನು ಸಂಪರ್ಕಿಸಿ ತಮ್ಮ ವಿವರಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆರನ್ನು ನಾಯಿಗೆ ಹೋಲಿಕೆ ಮಾಡಿ ನಿಂದನೆ- ಕಾನೂನು ಕ್ರಮಕ್ಕೆ ಅಲ್ಲಂ ಪ್ರಶಾಂತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ
ಜಿಲ್ಲಾ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಕಚೇರಿಗೆ ಬೇಟಿ ಸ್ಪಿಡ್ ಗವರ್ನರ್ ಕಡ್ಡಾಯವಾಗಿ ಆಳವಡೆಕೆ ಮಾಡಬೇಕು ಎಂದು ಸೂಚನೆ